ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರಗಳಾದ ‘ಲೈಫು ಇಷ್ಟೇನೇ ಹಾಗೂ ಲುಸಿಯ’ ನಿರ್ದೇಶಕ ಪವನ್ ಕುಮಾರ್ ಅವರ ಮೂರನೇ ಸಿನಿಮಾ ‘ಯು ಟರ್ನ್’ ಬಿಡುಗಡೆಗೆ ಮುಂಚೆಯೇ ದೊಡ್ಡ ಸುದ್ದಿಯನ್ನು ಮಾಡಿದೆ.
ದಕ್ಷಿಣ ಭಾರತದ ಪ್ರಖ್ಯಾತ ನಟಿ ಸಮಂತ ಹಾಗೂ ಜನಪ್ರಿಯ ನಟ ನಾಗ ಚೈತನ್ಯ (ನಾಗರ್ಜುನ ಅವರ ಪುತ್ರ) ಸಿನಿಮಾವನ್ನು ಬೆಂಗಳೂರಿನಲ್ಲಿ ವೀಕ್ಷಿಸಿ ತೆಲುಗು ಹಾಗೂ ತಮಿಳು ಭಾಷೆಗೆ ಅವತರಿಣಿಕೆ ಮಾಡಲು ಉತ್ಸಾಹ ತೋರಿದ್ದಾರೆ. ಖುದ್ದಾಗಿ ಸಮಂತ ಹಾಗೂ ನಾಗ ಚೈತನ್ಯ ಬಂದು ಚಿತ್ರದ ಬಹುತೇಕದ ಭಾಗದ ವೀಕ್ಷಣೆ ಮಾಡಿ ಪವನ್ ಕುಮಾರ್ ಅವರೇ ನಿರ್ದೇಶನ ಮಾಡಲು ಸಹ ಕೋರಿದ್ದಾರೆ.
ಪ್ರಸಿದ್ದ ನಟಿ ಸಮಂತ ನಿರ್ಮಾಣ ಮಾಡಿವುದರ ಜೊತೆಗೆ ಕನ್ನಡದಲ್ಲಿ ಶ್ರದ್ದ ಶ್ರೀನಾಥ್ ಅಭಿನಯ ಮಾಡಿರುವ ಪಾತ್ರವನ್ನು ಸಹ ನಿರ್ವಹಿಸಲು ಆಸೆಯನ್ನು ವ್ಯಕ್ತ ಮಾಡಿರುವುದು ತಿಳಿದು ಬಂದಿದೆ.
ಅಂದ ಹಾಗೆ ‘ಯು ಟರ್ನ್’ ಕನ್ನಡ ಸಿನಿಮಾ ಪವನ್ ಕುಮಾರ್ ಸ್ಟೂಡಿಯೋಸ್ ಅಲ್ಲಿ ತಯಾರಾಗಿರುವ ಚಿತ್ರ ನ್ಯೂ ಯಾರ್ಕ್ ಫಿಲ್ಮ್ ಫೆಸ್ಟಿವಲ್ ಅಲ್ಲಿ ಆಯ್ಕೆ ಆಗಿದೆ. ಮೇ ಮೊದಲ ವಾರದಲ್ಲಿ ಆರಂಭಗೊಳ್ಳುವ ಈ ಸಿನಿಮಾ ಉತ್ಸವಕ್ಕೆ ತಂಡದಿಂದ ನಿರ್ದೇಶಕ ಪವನ್ ಕುಮಾರ್ ಹಾಗೂ ಶ್ರದ್ದ ಶ್ರೀನಾಥ್ ಪಾಲ್ಗೊಳ್ಳುವರು.
ನ್ಯೂ ಯಾರ್ಕ್ ಫಿಲ್ಮ್ ಫೆಸ್ಟಿವಲ್ ಇಂದ ಬಂದ ತಕ್ಷಣ ಮೇ ತಿಂಗಳಿನಲ್ಲೇ ಈ ಸಿನಿಮಾದ ಬಿಡುಗಡೆ ಸಹ ರಾಜ್ಯಾದ್ಯಂತ ಆಗಲಿದೆ ಎಂದು ಸಿನಿಮಾದ ವಿತರಕ ಜ್ಯಾಕ್ ಮಂಜುನಾಥ್ ಅವರು ತಿಳಿಸಿದ್ದಾರೆ.
ಥ್ರಿಲ್ ಹಾಗೂ ಕುತೂಹಲದೊಂದಿಗೆ ಟ್ರಾಫಿಕ್ ಸಮಸ್ಯೆ ಬಗ್ಗೆಯೂ ಬೆಳಕು ಚೆಲ್ಲಿರುವ ಪವನ್ ಕುಮಾರ್ ಅವರು ನಿರ್ದೇಶನ ಅಲ್ಲದೆ ನಿರ್ಮಾಣ ಮಾಡಿರುವ ಚಿತ್ರ ‘ಯು ಟರ್ನ್’ ಮುಖ್ಯ ತಾರಾಗಣದಲ್ಲಿ ಶ್ರದ್ದ ಶ್ರೀನಾಥ್, ದಿಲೀಪ್ ರಾಜ್, ರಾಧಿಕ ಚೇತನ್, ರಾಜರ್ ನಾರಾಯಣ್, ಸುಧ ಬೆಳವಾಡಿ, ಸ್ಕಂದ ಅಶೋಕ್, ಪ್ರಮೋದ್ ಶೆಟ್ಟಿ, ಪ್ರತಿಭಾ ನಂದಕುಮಾರ್, ಕೃಷ್ಣ ಹೆಬ್ಬಾಲ್ ಹಾಗೂ ಇತರರು ಇದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸತ್ಯ ಹೆಗ್ಡೆ, ಅದ್ವೈತ ಗುರುಮೂರ್ತಿ ಹಾಗೂ ಸಿದ್ದಾರ್ಥ ನೂನಿ ಅವರ ಛಾಯಾಗ್ರಹಣ, ಸುರೇಶ್ ಅವರ ಸಂಕಲನ ಒದಗಿಸಿದ್ದಾರೆ.